Surprise Me!

ಉಡುಪಿಯಲ್ಲಿ ಮಹಿಮಾನ್ವಿತ ಸ್ವಾಮಿ ಕೊರಗಜ್ಜ ದೈವಸ್ಥಾನ | Oneindia Kannada

2018-01-17 11 Dailymotion

ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ದೇವಸ್ಥಾನಕ್ಕೆ ಹೇಗೆ ಪ್ರಾಮುಖ್ಯತೆಯಿದೆಯೋ, ದೈವಸ್ಥಾನಕ್ಕೂ ಆಷ್ಟೇ ಮಹತ್ವವಿದೆ. ದೈವಗಳನ್ನು ನಂಬದ ಕುಟುಂಬಗಳೇ ಇಲ್ಲದ ಈ ಎರಡು ಜಿಲ್ಲೆಗಳಲ್ಲಿ ನಾಗಾರಾಧನೆ ಮತ್ತು ಭೂತಾರಾಧನೆ ಪ್ರಮುಖ ಧಾರ್ಮಿಕ ಪೂಜಾ ಪದ್ದತಿಗಳು. <br /> <br />ಸೀಮೆಯ ಭೂತ, ಗುತ್ತಿನ ಭೂತ, ಗ್ರಾಮದ ಭೂತ, ಕುಟುಂಬದ ಭೂತ ಈ ರೀತಿ ವರ್ಗೀಕರಣಗೊಂಡು, ಪಂಜುರ್ಲಿ, ಬಬ್ಬುಸ್ವಾಮಿ, ಕೊರಗಜ್ಜ, ಬೈದರ್ಕಳ, ರಕ್ತೇಶ್ವರಿ, ಗುಳಿಗ ಹೀಗೆ ಸುಮಾರು 400ಕ್ಕೂ ಹೆಚ್ಚು ದೈವಗಳನ್ನು ವಿವಿಧ ಕುಟುಂಬಗಳು ಪೂಜಿಸಿಕೊಂಡು ಬರುತ್ತಿವೆ. <br /> <br />ಕಳೆದ ಅಕ್ಟೋಬರ್ ತಿಂಗಳಲ್ಲಿ, ಈ ಭಾಗದಲ್ಲಿ ಕಾರ್ಣಿಕ ಎಂದೇ ಹೇಳಲಾಗುವ ಕೊರಗಜ್ಜನ ದೈವಸ್ಥಾನದ ಅಮೂಲ್ಯ ಆಭರಣಗಳನ್ನು ಕಳ್ಳರು ಲಪಟಾಯಿಸಿದ್ದರು. ಮೊನ್ನೆ ಮಕರ ಸಂಕ್ರಾಂತಿಯ ದಿನ ಕದ್ದ ಆಭರಣಗಳನ್ನು ಕಳ್ಳರು ದೈವಗುಡಿಯ ಮುಂದೆಯಿಟ್ಟು 'ಕ್ಷಮೆಕೊರ್ಲಾ' (ಕ್ಷಮಿಸಿಬಿಡು) ಎಂದು ಒಕ್ಕಣೆ ಬರೆದಿಟ್ಟು ಹೋಗಿದ್ದಾರೆ. <br /> <br />ಉಡುಪಿ ಹೊರವಲಯದ ಕಟಪಾಡಿಯಲ್ಲಿರುವ ಕೊರಗಜ್ಜನ ದೈವಸ್ಥಾನದಲ್ಲಿ ಈ ಘಟನೆ ನಡೆದಿದೆ. ಕರಾವಳಿ ಭಾಗದಲ್ಲಿ 'ಅಜ್ಜ' ಎಂದೇ ಕರೆಯಲ್ಪಡುವ ಸ್ವಾಮಿ ಕೊರಗಜ್ಜನ ದೈವಸ್ಥಾನದಲ್ಲಿ ಕಳೆದ ವರ್ಷ ಅಕ್ಟೋಬರ್ ಎರಡರಂದು ಕಳ್ಳತನದ ಘಟನೆ ನಡೆದಿತ್ತು. <br />Thieves returned stolen jewellery of Swamy Koragajja Daivasthana at Katapady, near Udupi in Karnataka. This incident took place on Makara Sankranti day of Jan 15th. <br /> <br />

Buy Now on CodeCanyon